About Us
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರಾದ ನಮ್ಮ ನಾಮಧಾರಿ ಸಮುದಾಯದ ಯುವಕರು ಉದ್ಯೋಗದ ನಿಮಿತ್ತ ಊರಿನಿಂದ ಹೊರಹೋದಂತವರು ಇಂದು ಅವರವರ ಪ್ರರಿಶ್ರಮದಿಂದ ಮತ್ತು ಹಿರಿಯರ ಆಶೀರ್ವಾದದಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಸ್ವಂತ ನೆಲೆ ಕಂಡುಕೊಂಡಿದ್ದಾರೆ.ಕೆಲವರು ನೂರಾರು ಜನರಿಗೆ ಉದ್ಯೊಗ ನೀಡಿ ಹಲವಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಇನ್ನು ಕೆಲವರು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಹೊಂದಿದ್ದು ನೇಮಕಾತಿ ಮತ್ತು ಆಡಳಿತ ವಿಭಾಗದಲ್ಲಿ ತಮ್ಮದೇ ಆದ ಹಿರಿಮೆ ಹೊಂದಿದ್ದಾರೆ.ಇವರೆಲ್ಲರು ವಿವಿಧ ರೀತಿಯ ಸಮಾಜ ಸೇವೆಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಇಂದಿನ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸಂಪರ್ಕಿಸಿತ್ತಿರುವ ಇಂತಹ ಸೇವಾ ಮನೋಭಾವ ಹೊಂದಿರುವ ಸಮಾನ ಮನಸ್ಕ ಯುವಕರ ಮನದಾಳದ ಇಂಗಿತವನ್ನು ಮನಗಂಡು ನಮ್ಮ ನಾಮಧಾರಿ ಸಮುದಾಯದ ಯುವಕರಲ್ಲಿ ಒಗ್ಗಟ್ಟು ಮೂಡಿಸಲು ಮತ್ತು ಸಮುದಾಯದ ಒಳತಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಲು ಈ ವೇದಿಕೆಯನ್ನು ಸ್ಥಾಪಿಸಲಾಗಿದೆ.